ग्रन्थपरिचयः

ಸೂಕ್ತಸ್ತೋತ್ರಸಂಗ್ರಹಃ (ಸಂಸ್ಕೃತ ಆವೃತ್ತಿ)

by Research scholars of Sri Vyasatirtha Samshodhana Prathisthanam · 2026 · संस्कृतम्

संस्कृतम्

ಸೂಕ್ತಸ್ತೋತ್ರಸಂಗ್ರಹಃ (ಸಂಸ್ಕೃತ ಆವೃತ್ತಿ)

by Research scholars of Sri Vyasatirtha Samshodhana Prathisthanam

(5.0 · 3000 reviews) In Stock
ಸೂಕ್ತಸ್ತೋತ್ರಸಂಗ್ರಹಃ (ಸಂಸ್ಕೃತ ಆವೃತ್ತಿ) ನಿತ್ಯಪಾರಾಯಣಕ್ಕೆ ಯೋಗ್ಯವಾದ ವೈದಿಕ ಸೂಕ್ತಗಳು, ಸ್ತೋತ್ರಗಳು ಹಾಗೂ ದೇವತಾಧ್ಯಾನಗಳ ಅಪೂರ್ವ ಸಂಗ್ರಹವಾಗಿದೆ. ದ್ವೈತಸಂಪ್ರದಾಯದಲ್ಲಿ ನಿತ್ಯಪಾರಾಯಣಕ್ಕೆ ಪ್ರಚಲಿತವಾಗಿರುವ ಅನೇಕ ಪವಿತ್ರ ವೈದಿಕ ಮತ್ತು ಸ್ತೋತ್ರಗ್ರಂಥಗಳನ್ನು ಈ ಸಂಸ್ಕೃತ ಆವೃತ್ತಿಯಲ್ಲಿ ಸಮಗ್ರವಾಗಿ ಸಂಗ್ರ…

Pages

292

Language

sanskrit

Publisher

Sri Vyasatirtha Samshodhana Prathisthanam

Edition

Second

Binding

Perfect Binding

₹ 150

Inclusive of all taxes

1

About this book

ಸೂಕ್ತಸ್ತೋತ್ರಸಂಗ್ರಹಃ (ಸಂಸ್ಕೃತ ಆವೃತ್ತಿ) ನಿತ್ಯಪಾರಾಯಣಕ್ಕೆ ಯೋಗ್ಯವಾದ ವೈದಿಕ ಸೂಕ್ತಗಳು, ಸ್ತೋತ್ರಗಳು ಹಾಗೂ ದೇವತಾಧ್ಯಾನಗಳ ಅಪೂರ್ವ ಸಂಗ್ರಹವಾಗಿದೆ. ದ್ವೈತಸಂಪ್ರದಾಯದಲ್ಲಿ ನಿತ್ಯಪಾರಾಯಣಕ್ಕೆ ಪ್ರಚಲಿತವಾಗಿರುವ ಅನೇಕ ಪವಿತ್ರ ವೈದಿಕ ಮತ್ತು ಸ್ತೋತ್ರಗ್ರಂಥಗಳನ್ನು ಈ ಸಂಸ್ಕೃತ ಆವೃತ್ತಿಯಲ್ಲಿ ಸಮಗ್ರವಾಗಿ ಸಂಗ್ರಹಿಸಲಾಗಿದ್ದು, ವೈಯಕ್ತಿಕ ಆರಾಧನೆ ಹಾಗೂ ಆಧ್ಯಾತ್ಮಿಕ ಸಾಧನೆಗೆ ಇದು ಅತ್ಯಂತ ಉಪಯುಕ್ತವಾಗಿದೆ.

ಈ ಸಂಪುಟದಲ್ಲಿ ಭಾಗ್ಯಸೂಕ್ತ, ಪ್ರಾತಃಸೂಕ್ತ, ರುದ್ರಪ್ರಶ್ನೆ, ರಾತ್ರಿಸೂಕ್ತ, ವಿಷ್ಣುಸೂಕ್ತ, ಪವಮಾನಸೂಕ್ತ ಹಾಗೂ ತೈತ್ತಿರೀಯ ಉಪನಿಷತ್ತಿನ ಆಯ್ದ ಭಾಗಗಳು ಅಡಕವಾಗಿವೆ. ಇದರ ಜೊತೆಗೆ, ಭಗವದನುಗ್ರಹ, ಐಶ್ವರ್ಯ ಹಾಗೂ ಸರ್ವಮಂಗಳವನ್ನು ಕರುಣಿಸುವ ನಾರಾಯಣಹೃದಯ ಮತ್ತು ಲಕ್ಷ್ಮೀಹೃದಯ ಸ್ತೋತ್ರಗಳನ್ನೂ ಒಳಗೊಂಡಿದೆ.

ಈ ಸಂಗ್ರಹದಲ್ಲಿ ಕರ್ನಾಟಕ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀಮದ್ವ್ಯಾಸತೀರ್ಥರ ವಿರಚಿತ ಶ್ರೀನಿವಾಸಸ್ತುತಿ, ಲಘುಶಿವಸ್ತುತಿ, ಶ್ರೀಪಾದರಾಜಪಂಚರತ್ನಮಾಲಿಕಾ, ಶ್ರೀಬ್ರಹ್ಮಣ್ಯತೀರ್ಥಪಂಚರತ್ನಮಾಲಿಕಾಗಳೊಂದಿಗೆ, ಶ್ರೀರಾಮತೀರ್ಥರ ವಿರಚಿತ ಗುರ್ವಷ್ಟಕ, ಶ್ರೀಲಕ್ಷ್ಮೀವಲ್ಲಭತೀರ್ಥರ ಪಂಚವೈಷ್ಣವಸ್ತೋತ್ರ, ಶ್ರೀಶೇಷಚಂದ್ರಿಕಾಚಾರ್ಯರ ಸ್ತೋತ್ರ, ಕಾವೇರೀಸ್ತುತಿ, ಶ್ರೀವ್ಯಾಸಯತೀಶಚಿತ್ರಚರಿತಮ್, ಹಾಗೂ ಶ್ರೀಮಠದ ಗುರುಪರಂಪರಾ ಸ್ತೋತ್ರಗಳು ಸಂಗ್ರಹಿಸಲ್ಪಟ್ಟಿವೆ.

ಇದರೊಂದಿಗೆ ಶನೈಶ್ಚರಕೃತ ನರಸಿಂಹಸ್ತೋತ್ರ, ವಿವಿಧ ಭಗವದ್ಧ್ಯಾನಗಳು, ದೇವತಾತಾರತಮ್ಯ, ನವಗ್ರಹಸ್ತೋತ್ರಗಳು ಹಾಗೂ ನಿತ್ಯಪಾರಾಯಣಕ್ಕೆ ಅತ್ಯಂತ ಉಪಯುಕ್ತವಾದ ಇನ್ನೂ ಅನೇಕ ಸ್ತೋತ್ರಗಳು ಈ ಸಂಕಲನದಲ್ಲಿ ಸ್ಥಾನ ಪಡೆದಿವೆ.

ಭಾಗವತದ “ಪೌರಾಣೈಃ ಪ್ರಾಕೃತೈರಪಿ” ಎಂಬ ಸಂದೇಶಕ್ಕೆ ಅನುಗುಣವಾಗಿ, ಪುರಾಣಗಳಲ್ಲಿ ಉಲ್ಲೇಖವಾಗಿರುವ ಹಾಗೂ ಮಹನೀಯರು ರಚಿಸಿರುವ ಸ್ತೋತ್ರಗಳನ್ನು ಪೂಜಾನಂತರ ಪಠಿಸುವುದು ಭಗವಂತನಿಗೆ ಪ್ರಿಯಕರವೆಂದು ಪರಿಗಣಿಸಲಾಗಿದೆ. ಈ ಉದ್ದೇಶದಿಂದ ಭಕ್ತರು ತಮ್ಮ ನಿತ್ಯಪಾರಾಯಣದಲ್ಲಿ ಉಪಯೋಗಿಸಿಕೊಳ್ಳುವಂತೆ ಈ ಸೂಕ್ತಸ್ತೋತ್ರಸಂಗ್ರಹಃ ಸಿದ್ಧಪಡಿಸಲಾಗಿದೆ. ನಿತ್ಯಪಾರಾಯಣದ ಮೂಲಕ ಶ್ರೀಹರಿ, ವಾಯುದೇವರು ಹಾಗೂ ಗುರುಪರಂಪರೆಯ ಅನುಗ್ರಹಕ್ಕೆ ಪಾತ್ರರಾಗಲು ಈ ಗ್ರಂಥವು ಅಮೂಲ್ಯ ಸಹಾಯಕವಾಗಲಿದೆ.

ಸಂಪಾದಕರ ಕುರಿತು

ಈ ಸಂಸ್ಕೃತ ಆವೃತ್ತಿಯನ್ನು ಶ್ರೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನದ ಸಂಶೋಧಕರು ವಿಮರ್ಶಾತ್ಮಕವಾಗಿ ಸಂಪಾದಿಸಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಈ ಪ್ರತಿಷ್ಠಾನವು ದ್ವೈತವೇದಾಂತದ ಅಪೂರ್ವ ಸಾಹಿತ್ಯ, ಹಸ್ತಪ್ರತಿಗಳು ಹಾಗೂ ಶಾಸ್ತ್ರಗ್ರಂಥಗಳ ಸಂಶೋಧನೆ, ವಿಮರ್ಶಾತ್ಮಕ ಸಂಪಾದನೆ, ಪ್ರಕಟಣೆ ಮತ್ತು ಸಂರಕ್ಷಣೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.

ಲಭ್ಯವಿರುವ ಹಸ್ತಪ್ರತಿಗಳು ಮತ್ತು ಮುದ್ರಿತ ಆವೃತ್ತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಪಾಠಭೇದಗಳನ್ನು ಪರಾಮರ್ಶಿಸಿ, ಶುದ್ಧ ಹಾಗೂ ವಿಶ್ವಾಸಾರ್ಹ ಪಾಠವನ್ನು ಓದುಗರಿಗೆ ಒದಗಿಸುವ ಉದ್ದೇಶದಿಂದ ಈ ಆವೃತ್ತಿಯನ್ನು ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು, ಸಂಶೋಧಕರು, ವಿದ್ವಾಂಸರು ಮತ್ತು ಭಕ್ತರೆಲ್ಲರಿಗೂ ಉಪಯುಕ್ತವಾಗುವಂತೆ ಈ ಗ್ರಂಥವನ್ನು ಅತ್ಯಂತ ಪ್ರಾಮಾಣಿಕವಾಗಿ ರೂಪಿಸಲಾಗಿದೆ.