ग्रन्थपरिचयः

ಶ್ರೀನಾರಾಯಣಪಂಡಿತಾಚಾರ್ಯ ವಿರಚಿತ ಶ್ರೀಶಿವಸ್ತುತಿ – ೯ ವ್ಯಾಖ್ಯಾನಗಳೊಂದಿಗೆ

by Vid.C. R. Pradeep Simhacharya · 2019 · संस्कृतम्

संस्कृतम्

ಶ್ರೀನಾರಾಯಣಪಂಡಿತಾಚಾರ್ಯ ವಿರಚಿತ ಶ್ರೀಶಿವಸ್ತುತಿ – ೯ ವ್ಯಾಖ್ಯಾನಗಳೊಂದಿಗೆ

by Vid.C. R. Pradeep Simhacharya

(4.5 · 2000 reviews) In Stock
ಈ ಶಿವಸ್ತುತಿಯನ್ನು
ಶ್ರೀಮದಾನಂದತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾದ, ಲಿಕುಚ ವಂಶದ ಭೂಷಣರಾದ, ಕವಿಕುಲದ ತಿಲಕರಾದ ಶ್ರೀತ್ರಿವಿಕ್ರಮಪಂಡಿತಾಚಾರ್ಯ ಅವರ ಪುತ್ರರೂ, ಸ್ವತಃ ಮಹಾನ್ ಕವಿಗಳಾದ ಶ್ರೀನಾರಾಯಣಪಂಡಿತಾಚಾರ್ಯರವರು ರಚಿಸಿದ್ದಾರೆ. ಶ್ರೀನಾರಾಯಣಪಂಡಿತಾಚಾರ್ಯರು ಮಧ್ವವಿಜಯ, ಸಂಗ್ರಹ ರಾಮಾಯಣ ಮೊದಲಾದ ಪ್ರಸಿದ್ಧ ಗ್…

Pages

104

Language

sanskrit

Publisher

Sri Vyasatirtha Samshodhana Prathisthanam

Edition

first

Binding

Perfect Binding

ISBN

978-81-949035-4-3

₹ 100

Inclusive of all taxes

1

About this book

ಈ ಶಿವಸ್ತುತಿಯನ್ನು
ಶ್ರೀಮದಾನಂದತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾದ, ಲಿಕುಚ ವಂಶದ ಭೂಷಣರಾದ, ಕವಿಕುಲದ ತಿಲಕರಾದ ಶ್ರೀತ್ರಿವಿಕ್ರಮಪಂಡಿತಾಚಾರ್ಯ ಅವರ ಪುತ್ರರೂ, ಸ್ವತಃ ಮಹಾನ್ ಕವಿಗಳಾದ ಶ್ರೀನಾರಾಯಣಪಂಡಿತಾಚಾರ್ಯರವರು ರಚಿಸಿದ್ದಾರೆ. ಶ್ರೀನಾರಾಯಣಪಂಡಿತಾಚಾರ್ಯರು ಮಧ್ವವಿಜಯ, ಸಂಗ್ರಹ ರಾಮಾಯಣ ಮೊದಲಾದ ಪ್ರಸಿದ್ಧ ಗ್ರಂಥಗಳ ಕರ್ತೃಗಳು. ಈ ಶಿವಸ್ತುತಿಯನ್ನು ಅವರು ರಾಮೇಶ್ವರ ಕ್ಷೇತ್ರಯಾತ್ರೆಯ ಸಮಯದಲ್ಲಿ, ರಾಮೇಶ್ವರನ ಸನ್ನಿಧಿಯಲ್ಲಿ ರಚಿಸಿದರು ಎಂದು ಪರಂಪರೆಯಲ್ಲಿ ಹೇಳಲಾಗುತ್ತದೆ. ಈ ಸ್ತುತಿ —
ಪರಮ ವೈಷ್ಣವಶ್ರೇಷ್ಠನಾದ ಸದಾಶಿವನನ್ನು ವರ್ಣಿಸುತ್ತದೆ ಮಾಧ್ವ ಸಂಪ್ರದಾಯದ ಎಲ್ಲರೂ ಇದನ್ನು ಪ್ರತಿ ದಿನ ಭಕ್ತಿಯಿಂದ ಪಠಿಸುತ್ತಾರೆ ಈ ಸ್ತುತಿಯಲ್ಲಿ ಮಹಾದೇವನನ್ನು: ಅನೇಕ ಗುಣಗಳಿಂದ ಅಲಂಕರಿಸಿ, ಅತ್ಯಂತ ಸುಂದರ ಹಾಗೂ ಮನಮೋಹಕ ಶೈಲಿಯಲ್ಲಿ ಶ್ರೀಪಂಡಿತಾಚಾರ್ಯರು ಸ್ತುತಿಸಿದ್ದಾರೆ. ಈ ಸ್ತುತಿಗೆ ಅನೇಕ ವ್ಯಾಖ್ಯಾನಗಳು (ಟೀಕೆಗಳು) ಇವೆ.
ಇದೀಗ ಶ್ರೀಶಿವಸ್ತುತಿಯ ಒಂಬತ್ತು ವ್ಯಾಖ್ಯಾನಗಳು ಪ್ರಥಮಬಾರಿಗೆ ಮುದಿತವಾಗಿದೆ.
ಶ್ರೀಶಿವಸ್ತುತಿ ವ್ಯಾಖ್ಯಾನಗಳ ಪಟ್ಟಿ-
೦೧. ಶ್ರೀ ವೇದಾಂಗತೀರ್ಥ ಯತಿವಿರಚಿತ ಶಿವಸ್ತುತಿ ವ್ಯಾಖ್ಯಾನ
೦೨. ಶ್ರೀ ವಿಶ್ವಪತಿತೀರ್ಥ ಯತಿವಿರಚಿತ ಶಿವಸ್ತುತಿ ವ್ಯಾಖ್ಯಾನ
೦೩. ಶ್ರೀ ವೈಶ್ವನಾಥೀನಾರಾಯಣ ಪಂಡಿತಾಚಾರ್ಯ ಕೃತ ಶಿವಸ್ತುತಿ ಟೀಕಾ
೦೪. ಶ್ರೀ ಛಲಾರೀಶೇಷಾಚಾರ್ಯ ವಿರಚಿತ ಶಿವಸ್ತುತಿ ವ್ಯಾಖ್ಯಾನ
೦೫. ನೀರಾನೃಸಿಂಹ ವಿರಚಿತ ಶಿವಸ್ತುತಿ ಟೀಕಾ ಸುಬೋಧಿನಿ
೦೬. ಶ್ರೀ ಪೀತಾಂಬರಸೂರಿ ವಿರಚಿತ ಟೀಕಾ ಗೂಢಾರ್ಥಪ್ರಕಾಶಿಕಾ
೦೭. ರಂಗನಾಥ ವಿರಚಿತ ಶಿವಸ್ತುತಿ ಟೀಕಾ
೦೮. ಕಾವ್ಯಮಾಲಾ – ಅಜ್ಞಾತಕರ್ತೃಕ (೧)
೦೯. ಅಜ್ಞಾತಕರ್ತೃಕ ಶಿವಸ್ತುತಿ ಟೀಕಾ – (೨)

ಸಂಪಾದಕರು : ಸಿ.ಆರ್. ಪ್ರದೀಪಸಿಂಹಾಚಾರ್ಯ
ಶ್ರೀಯುತ ಪ್ರದೀಪಸಿಂಹಾಚಾರ್ಯರು ನಾಡಿನ ಪ್ರಸಿದ್ಧ ಗುರುಕುಲಾವದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶಾಸ್ತ್ರಾಧ್ಯಯನವನ್ನು ನಡೆಸಿರುವರು. ಈ ಶತಮಾನದ ಗಣ್ಯಾತಿಗಣ್ಯಸಂತರಾದ ಶ್ರೀಶ್ರೀವಿಶ್ವೇತೀರ್ಥರಲ್ಲಿ ಶ್ರೀಮನ್ನ್ಯಾಯಸುಧಾಧ್ಯಯನವನ್ನು ನಡೆಸಿ ಗುರುಗಳ ವಿಶೇಷ ಕೃಪೆಗೆ ಪಾತ್ರರಾದವರು. ಹತ್ತಾರು ವರ್ಷದ ಪಾಠ ಪ್ರವಚನ ಗ್ರಂಥರಚನೆ ಹಾಗೂ ಗ್ರಂಥಗಳ ಅನುವಾದದ ಅನುಭವವು ಇವರಲ್ಲಿದೆ.