ग्रन्थपरिचयः

ಶ್ರೀವಿಜಯೀಂದ್ರತೀರ್ಥ ವಿರಚಿತ ಶ್ರೀವ್ಯಾಸರಾಜಸ್ತೋತ್ರ – ಕನ್ನಡ ಅನುವಾದ ಸಮೇತ

by Dr.K.S.Krishnacharya · 2026 · ಕನ್ನಡ

ಕನ್ನಡ

ಶ್ರೀವಿಜಯೀಂದ್ರತೀರ್ಥ ವಿರಚಿತ ಶ್ರೀವ್ಯಾಸರಾಜಸ್ತೋತ್ರ – ಕನ್ನಡ ಅನುವಾದ ಸಮೇತ

by Dr.K.S.Krishnacharya

(5.0 · 6000 reviews) In Stock
ಶ್ರೀವ್ಯಾಸರಾಜಸ್ತೋತ್ರವು ಶ್ರೀವ್ಯಾಸರಾಜಗುರುಸಾರ್ವಭೌಮರ ಶಿಷ್ಯರು ಹಾಗೂ ೧೦೪ ಗ್ರಂಥಗಳ ಕರ್ತೃಗಳಾದ ಶ್ರೀವಿಜಯೀಂದ್ರತೀರ್ಥ ಶ್ರೀಪಾದಂಗಳವರು ವಿರಚಿತವಾದ ಮಹೋನ್ನತ ಸ್ತೋತ್ರವಾಗಿದೆ. ೨೫ ಶ್ಲೋಕಗಳನ್ನು ಒಳಗೊಂಡಿರುವ ಈ ಸ್ತೋತ್ರವು ಶ್ರೀವ್ಯಾಸರಾಜರ ಅಪೂರ್ವ ಮಹಿಮೆ, ಆಧ್ಯಾತ್ಮಿಕ ವೈಭವ ಹಾಗೂ ಲೋಕಾನುಗ್ರಹಶಕ್ತಿಯನ್ನು ಮನ…

Pages

188

Language

Kannada

Publisher

Sri Vyasatirtha Samshodhana Prathisthanam

Edition

First

Binding

Perfect Binding

₹ 120

Inclusive of all taxes

1

About this book

ಶ್ರೀವ್ಯಾಸರಾಜಸ್ತೋತ್ರವು ಶ್ರೀವ್ಯಾಸರಾಜಗುರುಸಾರ್ವಭೌಮರ ಶಿಷ್ಯರು ಹಾಗೂ ೧೦೪ ಗ್ರಂಥಗಳ ಕರ್ತೃಗಳಾದ ಶ್ರೀವಿಜಯೀಂದ್ರತೀರ್ಥ ಶ್ರೀಪಾದಂಗಳವರು ವಿರಚಿತವಾದ ಮಹೋನ್ನತ ಸ್ತೋತ್ರವಾಗಿದೆ. ೨೫ ಶ್ಲೋಕಗಳನ್ನು ಒಳಗೊಂಡಿರುವ ಈ ಸ್ತೋತ್ರವು ಶ್ರೀವ್ಯಾಸರಾಜರ ಅಪೂರ್ವ ಮಹಿಮೆ, ಆಧ್ಯಾತ್ಮಿಕ ವೈಭವ ಹಾಗೂ ಲೋಕಾನುಗ್ರಹಶಕ್ತಿಯನ್ನು ಮನೋಜ್ಞವಾಗಿ ವರ್ಣಿಸುತ್ತದೆ.

ಶ್ರೀವ್ಯಾಸರಾಜರ ಅಂತರ್ಯಾಮಿಯಾದ ಶ್ರೀಹರಿಯ ಅನುಗ್ರಹದಿಂದ ಈ ಪವಿತ್ರ ಸ್ತೋತ್ರದ ಪಾರಾಯಣವು ಭಕ್ತರ ಅನಿಷ್ಟಗಳನ್ನು ನಿವಾರಿಸಿ, ಸಕಲ ಮಂಗಳಗಳನ್ನು ಕರುಣಿಸಿ, ಅಂತಿಮವಾಗಿ ಮೋಕ್ಷಪ್ರಾಪ್ತಿಗೆ ಕಾರಣವಾಗುತ್ತದೆ ಎಂಬುದು ಪರಂಪರೆಯ ಅಚಲವಾದ ನಂಬಿಕೆಯಾಗಿದೆ.

ಸಂಪಾದಕರು: ಡಾ. ಕೆ. ಎಸ್. ಕೃಷ್ಣಾಚಾರ್ಯ, ಕೆಂಪದಾಳಿಹಳ್ಳಿ

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನ್ಯಾಯಸುಧಾವನ್ನು ಅಧ್ಯಯನ ಮಾಡಿದ ಡಾ. ಕೆ. ಎಸ್. ಕೃಷ್ಣಾಚಾರ್ಯರು, ಪಾಂಡಿತ್ಯಪೂರ್ಣ ಪ್ರವಚನಗಳು ಹಾಗೂ ಶಾಸ್ತ್ರೀಯ ದೃಷ್ಟಿಯಿಂದ ಪ್ರಾಚೀನ ತಾತ್ತ್ವಿಕ ಗ್ರಂಥಗಳ ವಿಮರ್ಶಾತ್ಮಕ ಸಂಪಾದನೆಯಲ್ಲಿ ತಮ್ಮ ವಿಶಿಷ್ಟ ಪರಿಣತಿಯನ್ನು ಮೆರೆದಿರುವ ಖ್ಯಾತ ವಿದ್ವಾಂಸರಾಗಿದ್ದಾರೆ. ಅವರ ವಿದ್ವತ್ತಿನ ಸೇವೆ ಮತ್ತು ಶ್ರದ್ಧಾಪೂರ್ವಕ ಸಂಪಾದಕೀಯ ಪರಿಶ್ರಮವು ಈ ಗ್ರಂಥದ ಮೌಲ್ಯವನ್ನು ಇನ್ನಷ್ಟು ಉನ್ನತಗೊಳಿಸಿದೆ.